Thursday 2 June 2016

ಮಂತನ

                                               



                  ಬರೆಯದೇ ತುಂಬಾ ಕಾಲವೇ ಆಗಿದೆಯಲ್ಲ,ನನ್ನೊಳಗಿನ ಸಾಹೀತಿ ಮಲಗೇ ಬಿಟ್ಟ ಹಾಗಿದೆ, ಬಡಿದೆಬ್ಬಿಸಬೇಕಿದೆ....... ಇದೇನು ಇಸೀನಾ...... ನಿದ್ದೆ ಮಾಡಿದವರನ್ನು ಎಬ್ಬಿಸಿದಂಗೆ....... 

ಬರಹವನ್ನು ಬಿಟ್ಟು ತುಂಬಾ ದಿನ ಆಗಿರೋದ್ರಿಂದ ಕೈ ಓಡೋದೇ ಇಲ್ಲಾ....... 

ಆಫೀಸ್ ಕೆಲಸ, ಮನೆಕೆಲಸ ಗಂಡ ಫ್ರೆಂಡ್ಸ್ ಅಂತ ತುಂಬಾ ಬುಸಿ ಆಗಿಬಿಟ್ಟಿದ್ದೆ even ನಂಗೆ ಅಂತ ಟೈಮ್ ಇರ್ತಿರ್ಲಿಲ್ಲಾ 
ಅದರಲ್ಲೂ ಸ್ಮಾರ್ಟ್ ಫೋನ್ ಕೈಯಲ್ಲಿದ್ರೆ ಬೇರೆ ಯಾರು ಕಾಣ್ಸೋದೇ ಇಲ್ಲಾ , hubby ಅಂತಿರ್ತಾರೆ ಯಾವಾಗ್ಲೂ ...... "ಒಂದಿನ ನನ್ನೇ ಮರೆತು ಬಿಟ್ರು ಆಶ್ಚರ್ಯ ಇಲ್ಲ ಅಂತ ".. 

ಅದಿಕ್ಕೆ ಸದ್ಯಕ್ಕೆ ಸ್ಮಾರ್ಟ್ ಫೋನ್ ಇಂದ ಬಿಡುಗಡೆ ಪಡೆದು ನನ್ನ ಬರಹದತ್ತ ಬಂದಿದ್ದೇನೆ...... 
 


Monday 24 February 2014

ಒಮ್ಮೊಮ್ಮೆ ಯಾಕೇ ಹೀಗೆ........

ಒಮ್ಮೊಮ್ಮೆ ಯಾಕೇ ಹೀಗೆ........

ಏನು ಬೇಡ ಯಾರು ಬೇಡ ಅನ್ನಿಸೋದು ಯಾಕೆ ? ವಾಟ್'ಸ್ ಅಪ್, ಫೇಸ್ ಬುಕ್, ಮೆಸಜ್ ಕಾಲ್, even ನಮ್ಮ ಅವಿಭಾಜ್ಯ ಅಂಗದಂತಿರುವ ಫೋನ್ ಕೂಡ ಬೇಡ ಅನ್ನಿಸೋಕೆ ಶುರುವಾಗುತ್ತೆ!!!!! ಎಷ್ಟು ಹೊತ್ತಿಗೆ ಕಾಲ್ ಬರತ್ತೋ ಅಂತ ಕಾಯ್ತಾ ಇದ್ದೆ, ಈಗ ಯಾಕಾದರೂ ಕಾಲ್ ಮಾಡ್ತಾರೋ ಅನ್ನಿಸ್ತಾ ಇದೆ. ಮನೆ ಆಫೀಸು ಬಂದು ಬಳಗ ಫ್ರೆಂಡ್ಸ್ ಯಾರು ಬೇಡ ನಾನು ಮಾತ್ರ ಬೇಕು.ಒಂಟಿಯಾಗಿರಬೇಕು, ಕತ್ತಲೆಯಲ್ಲಿ ಮುಖ ಮುಚ್ಚಿ ಬಿಕ್ಕಳಿಸಬೇಕು, ಹೀಗೆ ಏನೇನೂ ಹುಚ್ಚು ಕಲ್ಪನೆ "ಬೆಟ್ಟದ ಮೇಲ್ಲೊಂದು ಮನೆಯ ಮಾಡಿ" ಎಂಬಂತೆ ಒಬ್ಬಂಟಿಯಾಗಿ ಕಾಡು ಮನುಷ್ಯಳಂತೆ ಜೀವಿಸುವ ತವಕ. 

ನಿಜವಾಗುವ ಗಳಿಗೆಗೋಸ್ಕರ ಒದ್ದಾಟ, ಕನಸಲ್ಲೂ ನಿಜವಾಗದ ನೈಜ ಕಥೆ............!!!!!!!!!!!!!
ಇಂತ ಎಷ್ಟೋ ಕಥೆಯಂತ ಕನಸುಗಳು, ಕನಸಂತ ನಿಜಗಳು..................

Tuesday 7 January 2014

     ಸಂಕ್ರಾಂತಿ ಹಬ್ಬದ ಆಚರಣೆಯ ವೈವಿದ್ಯತೆ ಮತ್ತು ಹಿನ್ನೆಲೆ



        ಸಂಕ್ರಾಂತಿ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಆಚರಿಸಲಾಗುವ ಒಂದು ಹಬ್ಬ. ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ಸಂಕ್ರಾಂತಿಯನ್ನು ಧಾರ್ಮಿಕ ತತ್ವಗಳಿಂದ ಸ್ವತಂತ್ರವಾಗಿ ಆಚರಿಸಲಾಗುತ್ತದೆಯಾದರೂ ವೇದಾಂಗ ಜ್ಯೋತಿಷಶಾಸ್ತ್ರದ ತಳಹದಿ ಹೊಂದಿರುವುದರಿಂದ ಮುಖ್ಯವಾಗಿ ಹಿಂದೂ ಧರ್ಮದವರಿಂದ ಆಚರಿಸಲ್ಪಡುತ್ತದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡುಗಳ ಮುಖ್ಯ ಹಬ್ಬಗಳಲ್ಲಿ ಸಂಕ್ರಾಂತಿಯೂ ಒಂದು.

             ಸನಾತನ ಹಿಂದೂ ಧರ್ಮದ ಬುನಾದಿಯಾಗಿರುವ ವೇದಗಳ ಅಂಗಗಳೆಂದೇ ಪ್ರಸಿದ್ಧವಾಗಿರುವ ಆರು ವೇದಾಂಗಗಳಲ್ಲಿ ಒಂದಾದ ಜ್ಯೋತಿಷವನ್ನು ವೇದಗಳ ಕಣ್ಣೆಂದು ಗುರುತಿಸುತ್ತಾರೆ. ವೇದದಳ ಕಾಲದಿಂದಲೂ ಶುಭಕಾರ್ಯಗಳಿಗೆ ಮುಹೂರ್ತಾದಿ ಕಾಲವನ್ನು ನಿರ್ಣಯಿಸಿ, ಗ್ರಹಗಳ ಸ್ಥಿತಿ-ಗತಿ, ರಾಶಿ-ನಕ್ಷತ್ರ, ಗ್ರಹಣ, ಅಸ್ತೋದಯಗಳನ್ನು ನಿರ್ಣಯಿಸಿ, ಶುಭಾಶುಭ ಫಲಗಳನ್ನು ತೋರುತ್ತಾ, ಹಬ್ಬ-ಹರಿದಿನಗಳನ್ನು ಋತುಗಳಿಗನುಸಾರವಾಗಿ ಲೆಕ್ಕಾಚಾರ ಹಾಕಿ ಗುರುತಿಸುತ್ತಿದ್ದ ಶಾಸ್ತ್ರವೇ ಜ್ಯೋತಿಷ. ಈ ಶಾಸ್ತ್ರದಂತೆ, ಸೂರ್ಯನು ನಿರಯಣ ಮಕರರಾಶಿಯನ್ನು ಪ್ರವೇಶಿಸಿದಾಗ, "ಮಕರ ಸಂಕ್ರಾಂತಿ"ಯಾಗುತ್ತದೆ. ಈ ಕಾಲವು ಪ್ರತಿವರ್ಷ ಗ್ರೆಗೋರಿಯನ್ ಪಂಚಾಂಗದ ಜನವರಿ ೧೪ರ ಸುಮಾರಿಗೆ ಬೀಳುತ್ತದೆ. ಹಿಂದೆ, ಈ ಕಾಲವೇ ಉತ್ತರಾಯಣ ಅಥವಾ ಸೂರ್ಯನ ಉತ್ತರದಿಕ್ಕಿನ ಪಯಣದ ಆರಂಭವನ್ನು ಸೂಚಿಸುವ ಕಾಲವೂ ಆಗಿತ್ತಾದ್ದರಿಂದ ಭೂಮಿಯ ಉತ್ತರಾರ್ಧಗೋಳದಲ್ಲಿ ಚಳಿ-ಬೆಚ್ಚನೆಯ ವಾತಾವರಣ ಆರಂಭವಾಗಿ, ಬೆಳೆ ಕಟಾವಿನ ಕಾಲವೂ ಆಗಿತ್ತು. ಈಗ ಉತ್ತರಾಯಣ ಡಿಸೆಂಬರ್ ೨೨ಕ್ಕೇ ಆದರೂ, ಹಿಂದಿನಂತೆಯೇ ಜನವರಿ ೧೪ ರಂದು ನಡೆಯುವ ಮಕರಸಂಕ್ರಾಂತಿಯಂದೇ ಉತ್ತರಾಯಣದ ಆಚರಣೆಯೂ ನಡೆಯುತ್ತದೆ.ಮಹಾಭಾರತದ ಕತೆಯಲ್ಲಿ ಇಚ್ಚಾ ಮರಣಿಯಾದ ಬೀಷ್ಮರು ಪ್ರಾಣ ಬಿಡಲು ಉತ್ತರಾಯಣ ಪರ್ವ ಕಾಲವನ್ನು ಕಾದಿದ್ದರು ಎಂಬ ಉಲ್ಲೆಖವಿದೆ.

ಸೂರ್ಯೋದಯ ಪೂರ್ವದಲ್ಲಿ ಮತ್ತು ಸೂರ್ಯಾಸ್ತಮಾನ ಪಶ್ಚಿಮದಲ್ಲಿ ಎಂದು ಹೇಳುವುದಾದರೂ, ಯಾವುದೇ ಸ್ಥಳದಲ್ಲಿ ಕರಾರುವಾಕ್ಕಾಗಿ ಪೂರ್ವದಲ್ಲೇ ಸೂರ್ಯೋದಯವಾಗುವುದು ಮತ್ತು ಪಶ್ಚಿಮದಲ್ಲೇ ಸೂರ್ಯಾಸ್ತಮಾನವಾಗುವುದು ವರ್ಷದಲ್ಲಿ ಎರಡೇ ದಿನಗಳಂದು. ಆ ದಿನಗಳನ್ನು ಈಕ್ವಿನಾಕ್ಸ್ (equinox)ಎಂದು ಕರೆಯುತ್ತಾರೆ. ಅಂದು ಹಗಲಿರುಳುಗಳು ದಿನವನ್ನು ಸಮಪಾಲಾಗಿ, ಅಂದರೆ ೧೨ಗಂಟೆಗಳಾಗಿ ಹಂಚಿಕೊಳ್ಳುತ್ತವೆ. ವರ್ಷದ ಉಳಿದ ದಿನಗಳಲ್ಲಿ ಹಗಲಿರುಳುಗಳ ಪಾಲು ಸಮವಾಗಿರುವುದಿಲ್ಲ. ಬೇಸಗೆಯಲ್ಲಿ ಹಗಲು ಹೆಚ್ಚು, ಇರುಳು ಕಮ್ಮಿ. ಚಳಿಗಾಲದಲ್ಲಿ ಹಗಲು ಕಮ್ಮಿ, ಇರುಳು ಹೆಚ್ಚು.
ಈಕ್ವಿನಾಕ್ಸ್ ದಿವಸಗಳ ಹೊರತಾಗಿ ಸೂರ್ಯನ ಉದಯ ಪೂರ್ವದ ಬಲಕ್ಕೆ (ಅಂದರೆ ಉತ್ತರಕ್ಕೆ) ಅಥವಾ ಎಡಕ್ಕೆ (ಅಂದರೆ ದಕ್ಷಿಣಕ್ಕೆ) ಆಗುತ್ತದೆ. ಚಳಿಗಾಲ (ಅಂದರೆ ಇರುಳಿನ ಪ್ರಮಾಣ)ಹೆಚ್ಚಾದಂತೆ ಸೂರ್ಯನ ಉದಯ ಹೆಚ್ಚು ದಕ್ಷಿಣ ದಿಕ್ಕಿಗೆ ಚಲಿಸುವುದು ಗೋಚರಿಸುತ್ತದೆ. ಕೊನೆಗೆ ಒಂದು ದಿನ ದಕ್ಷಿಣದ ತುತ್ತ ತುದಿಯ ಹಂತವನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುಧ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ. ಅಂದರೆ ಸೂರ್ಯ ಇನ್ನು ದಕ್ಷಿಣ ದಿಕ್ಕಿನತ್ತದ ತನ್ನ ಚಲನವನ್ನು ನಿಲ್ಲಿಸಿ ಉತ್ತರಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಈ ದಿನ ಉತ್ತರಾಯಣದ ದಿನ. ಇದು ಚಳಿಗಾಲ ಮುಗಿದು ಮುಂಬರುವ ಬೇಸಗೆಯ ಮುನ್ಸೂಚನೆ. winter solstice ಎಂದೂ ಕರೆಯಲ್ಪಡುತ್ತದೆ. ಸುಮಾರು ಡಿಸೆಂಬರ್ ೨೨ ಈ ದಿನ. ಈ ದಿನವನ್ನು ಮಕರ ಸಂಕ್ರಾಂತಿಯೆಂದು ಗುರುತಿಸಬೇಕಾಗಿದ್ದರೂ ಸಾಂಪ್ರದಾಯಿಕವಾಗಿ ಜನವರಿ ತಿಂಗಳ ನಡುವಿನಲ್ಲಿ ಮಕರ ಸಂಕ್ರಾಂತಿಯನ್ನು ಆಚರಿಸುತ್ತೇವೆ.

           ಇಲ್ಲಿಂದ ಸೂರ್ಯೋದಯ ಇನ್ನು ಆರು ತಿಂಗಳು ಉತ್ತರದ ದಿಕ್ಕಿನಲ್ಲಿ ಚಲಿಸುತ್ತಾ ನಡುವೆ ಮತ್ತೆ ಈಕ್ವಿನಾಕ್ಸ್ ದಿನವನ್ನೂ ತಲುಪಿ, ಇನ್ನೂ ಅದೇ ದಿಕ್ಕಿನಲ್ಲಿ (ಉತ್ತರಕ್ಕೆ)ಚಲಿಸುತ್ತಾ ಹೋಗುತ್ತದೆ. ಉತ್ತರಕ್ಕೆ ಹೆಚ್ಚು ಹೋದಂತೆಲ್ಲಾ ಹಗಲಿನ ಪ್ರಮಾಣ ಹೆಚ್ಚಾಗಿ ಇರುಳು ಕಮ್ಮಿಯಾಗುತ್ತಾ ಹೋಗುತ್ತದೆ. ಸೂರ್ಯನ ತಾಪ ಹೆಚ್ಚಾಗುತ್ತಾ ಬೇಸಗೆಯನ್ನು ಅನುಭವಿಸುತ್ತೇವೆ. ಕೊನೆಗೆ ಒಂದು ದಿನ ಉತ್ತರದ ತುತ್ತ ತುದಿಯನ್ನು ತಲುಪಿ, ಅಚಲವೆಂಬಂತೆ ಕಂಡು, ಮರುದಿನದಿಂದ ಸೂರ್ಯನ ಉದಯ ಮರಳಿ ವಿರುದ್ಧ ದಿಕ್ಕಿನಲ್ಲಿ ಆಗುತ್ತಾ ಚಲಿಸುತ್ತದೆ. ಅಂದರೆ ಸೂರ್ಯ ಇನ್ನು ಉತ್ತರ ದಿಕ್ಕಿನತ್ತದ ತನ್ನ ಚಲನೆಯನ್ನು ನಿಲ್ಲಿಸಿ ದಕ್ಷಿಣಕ್ಕೆ ಚಲಿಸಲು ಪ್ರಾರಂಭಿಸುತ್ತಾನೆ. ಇದು ದಕ್ಷಿಣಾಯನದ ದಿನ. ಬೇಸಗೆ ಮುಗಿದು ಮುಂಬರುವ ಚಳಿಗಾಲದ ಮುನ್ಸೂಚನೆ. ಈ ದಿನವನ್ನು ಕರ್ಕಾಟಕ ಸಂಕ್ರಾಂತಿ ಎಂದು ಗುರುತಿಸುತ್ತಾರೆ. summer solstice ಎಂದೂ ಕರೆಯಲ್ಪಡುತ್ತದೆ. ಸುಮಾರು ಜೂನ್ ೨೧ ಈ ದಿನ.

              ಹೀಗೆ ಕಾಣುವ ಸೂರ್ಯನ ಚಲನೆಗೆ ಭೂಮಿಯ ಅಕ್ಷರೇಖೆ (axis) ಸುಮಾರು 22 1/2 degree ವಾಲಿರುವುದು ಕಾರಣ. ಯಾವುದಾದರೂ ಒಂದು ನಿಗದಿತ ಜಾಗದಲ್ಲಿ ದಿನಾಲು ನಿಂತು, ದಿನದ ಒಂದೇ ನಿಗದಿತ ಸಮಯದಲ್ಲಿ, ಆಗಸದಲ್ಲಿ ಸೂರ್ಯನ ಸ್ಥಾನವನ್ನು ಗುರುತು ಹಾಕಿಕೊಂಡು, ಈ ರೀತಿ ವರ್ಷವಿಡೀ ಮಾಡಿದರೆ, ಗುರುತು ಹಾಕಿಕೊಂಡ ಆ ಬಿಂದುಗಳೆಲ್ಲಾ ಸುಮಾರು '8'ರ ಆಕೃತಿಯಲ್ಲಿ ಕಾಣುತ್ತವೆ. ಈ ವಿನ್ಯಾಸವನ್ನು analemma ಎನ್ನುತ್ತಾರೆ. '8'ರ ಆಕೃತಿಯ ನೆತ್ತಿಯ ಬಿಂದು summer solstice ದಿನದಂದು ಆಗುತ್ತದೆ. ಆ ಆಕೃತಿಯ ಅಡಿಯ ಬಿಂದು winter solstice, ಅಂದರೆ ಮಕರ ಸಂಕ್ರಾಂತಿಯ ದಿನದಂದು ಆಗುತ್ತದೆ. ನಡುವೆ ರೇಖೆಗಳು ಪರಸ್ಪರ ಹಾದುಹೋಗುವ ಬಿಂದು equinox ದಿನಗಳು. 8 ರ ಆಕೃತಿಯ ನೆತ್ತಿಯಿಂದ ಅದರ ಅಡಿಯ ಬಿಂದುವಿನ ತನಕದ ದಿನಗಳು ವರ್ಷದ ದಕ್ಷಿಣಾಯನದ ದಿನಗಳು. ಆ ಆಕೃತಿಯ ಅಡಿಯಿಂದ ಅದರ ನೆತ್ತಿಯ ಬಿಂದುವಿನ ತನಕದ ದಿನಗಳು ಉತ್ತರಾಯಣದ ದಿನಗಳು.

ಕರ್ನಾಟಕದಲ್ಲಿ ಸಂಕ್ರಾಂತಿಗೆ ಸಂಬಂಧಪಟ್ಟ ಆಚರಣೆಗಳಲ್ಲಿ ಮುಖ್ಯವಾಗಿ ಕಂಡುಬರುವುದು "ಎಳ್ಳು ಬೆಲ್ಲ". ಮನೆಯಲ್ಲಿ ಎಳ್ಳ್ಳು ಬೆಲ್ಲನ್ನು ತಯಾರಿಸಿ ಸುತ್ತಲಿನ ಮನೆಗಳಿಗೆ "ಎಳ್ಳುಹಂಚುವುದು" ಸಂಕ್ರಾಂತಿಯ ಸಂಪ್ರದಾಯಗಳು. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು,ಹಣ್ಣು,ಮತ್ತು ಕಬ್ಬಿನ ತುಂಡುಗಳನ್ನು ಸಹ ಬೀರುವುದುಂಟು.ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ]],ಸಿಪ್ಪೆ ತೆಗೆದ ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳನ್ನು ಸೇರಿಸಿ "ಎಳ್ಳು ಬೆಲ್ಲ" ತಯಾರಿಸಲಾಗುತ್ತದೆ.

         ತಮಿಳುನಾಡಿನಲ್ಲಿ ಈ ಹಬ್ಬವನ್ನು "ಪೊಂಗಲ್" ಎಂದು ಕರೆಯಲಾಗುತ್ತದೆ. ಇಲ್ಲಿ ಇದು ನಾಲ್ಕು ದಿನಗಳ ಹಬ್ಬ - ಈ ನಾಲ್ಕು ದಿನಗಳು ಮತ್ತು ಆ ದಿನಗಳಲ್ಲಿನ ಆಚರಣೆಗಳು ಹೀಗಿವೆ: ಭೋಗಿ: ಹೊಸ ಬಟ್ಟೆಗಳು, ಪೊಂಗಲ್: ಸಮೃದ್ಧಿಯ ಸಂಕೇತವಾಗಿ ಹಾಲು-ಬೆಲ್ಲಗಳನ್ನು ಪಾತ್ರೆಯಲ್ಲಿ ಕುದಿಸಿ ಉಕ್ಕಿಸಲಾಗುತ್ತದೆ. ಮಾಟ್ಟು ಪೊಂಗಲ್: ಗೋಪೂಜೆ, ಕೆಲವು ಕಡೆಗಳಲ್ಲಿ "ಜಲ್ಲಿಕಟ್ಟು" ಎಂಬ ಗೂಳಿಯನ್ನು ಪಳಗಿಸುವ ಆಟ ನಡೆಯುತ್ತದೆ

              ಮಕರ ಸಂಕ್ರಾಂತಿಯಂದು ಕೇರಳದ ಶಬರಿಮಲೆಯಲ್ಲಿ ಕಾಣುವ ಮಕರಜ್ಯೋತಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಅಯ್ಯಪ್ಪ ವೃತಾಧಾರಿಗಳಾದ ಜನರು ಶಬರಿಮಲೆಗೆ ತೆರಳಿ ತಮ್ಮ ಸ್ವಾಮಿಯ ಪಾದಕ್ಕೆರಗಿ ಮಕರ ಜ್ಯೋತಿಯ ದರ್ಶನವನ್ನು ಪಡೆದರೆ ಜನ್ಮ ಸಾರ್ಥಕವಾಗುವುದೆಂಬ ನಂಬಿಕೆಯಿಂದಾಗಿ ಲಕ್ಷೋಪಲಕ್ಷ ಜನರು ಈ ಜ್ಯೋತಿಯ ದರ್ಶನಕ್ಕಾಗಿ ವರ್ಷಂಪ್ರತಿ ಶಬರಿಮಲೆ ಸನ್ನಿಧಾನಕ್ಕಾಗಮಿಸುತ್ತಾರೆ."ಮಕರ ವಿಳಕ್ಕು"ಎಂದು ಕರೆಯಲ್ಪಡುವ ಈ ಜ್ಯೋತಿಯು ಶಬರಿಮಲೆಯ ಬೆಟ್ಟದಿಂದ ಮೂರು ಬಾರಿ ಗೋಚರವಾಗುತ್ತಿದ್ದು, ಅಂತೂ ಇದು ವೈಜ್ಞಾನಿಕವಾಗಿಸಾಬೀತಾಗಿಲ್ಲವಾದರೂ, ಪ್ರಸ್ತುತ ಕಾಲದಲ್ಲಿಯೂ ಆಧ್ಯಾತ್ಮಿಕತೆಯ ಕುರುಹನ್ನು ತೋರಿಸುತ್ತದೆ ಎನ್ನುತ್ತಾರೆ ಭಕ್ತರು.ನಮನ ಒಟ್ಟಿನಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿ ಲೋಕದ ಕಾರಿರುಳನ್ನು ಹೋಗಲಾಡಿಸುವಂತೆ ಜನರು ಈ ಕಾಲದಲ್ಲಿ ಪುಣ್ಯ ಕಾರ್ಯಗಳಲ್ಲಿಯೂ ಆಧ್ಯಾತ್ಮಿಕ ಚಿಂತೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಮುಕ್ತಿ ಮಾರ್ಗದಲ್ಲಿ ಸಾಗುವಂತೆ ಈ ಆಚರಣೆಯು ಪ್ರೇರಣೆಯನ್ನು ನೀಡುತ್ತದೆ.

              ಮುಖ್ಯವಾಗಿ ದಕ್ಷಿಣ ಭಾರತದ ಹಬ್ಬವಾದರೂ, ಇತರ ಸ್ಥಳಗಳಲ್ಲಿ ಸಹ ಬೇರೆ ಬೇರೆ ಹೆಸರುಗಳಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಗುಜರಾತ್ ಮತ್ತು ಮಹಾರಾಷ್ಟ್ರಗಳಲ್ಲಿ ಸಂಕ್ರಾಂತಿಯ ದಿನದಂದು ಗಾಳಿಪಟಗಳನ್ನು ಹಾರಿಬಿಡುವ ಸಂಪ್ರದಾಯವುಂಟು.

           ಮಹಾರಾಷ್ಟ್ರದಲ್ಲಿಯೂ, ಎಳ್ಳು ಮತ್ತು ಸಕ್ಕರೆಯ ಕುಸುರಿಕಾಳನ್ನು ಬಂಧು ಮಿತ್ರರಿಗೆ ಹಂಚುವ ರೂಢಿ ಇದೆ. ಪ್ರಮುಖವಾಗಿ ಅವರು, ಎಳ್ಳಿನ ಉಂಡೆ ಗಳನ್ನು ಹಂಚುತ್ತಾರೆ. ಅದಕ್ಕೆ ಅವರು ಲಡ್ಡು ಎನ್ನುತ್ತಾರೆ. ಪಂಜಾಬ್ ಮತ್ತು ಹರಿಯಾಣಗಳಲ್ಲಿ ಸಂಕ್ರಾಂತಿಗೆ "ಲೋಹರಿ," ಎಂದು ಹೆಸರು.

             ಕರ್ನಾಟಕದ ಸಂಪ್ರದಾಯದ ತರಹ ಬಿಡಿಕಾಳುಗಳನ್ನು ಹಂಚುವ ಪದ್ಧತಿಯಿಲ್ಲ. ಹಾ. ಎಳ್ಳುಂಡೆಕೊಡುವಾಗ ತಪ್ಪದೆ, " ತಿಳ್ಗುಳ್ ಘ್ಯಾ, ಅಣಿ ಗೋಡ್ ಗೋಡ್ ಬೋಲ",  (ಎಳ್ಳು ಬೆಲ್ಲ ತಿಂದು ಬೆಲ್ಲದಂತೆ ಮಾತಾಡಿ )ಎನ್ನುವ ಮಾತು ಹೇಳುವುದನ್ನು ಮರೆಯುವುದಿಲ್ಲ !

ಮಾಹಿತಿ ಕೃಪೆ : ಗೂಗಲ್

Friday 15 November 2013

ಇನಿಯಾ ????


                                             ಇನಿಯಾ ????


ಇರುಳಾ ತಬ್ಬಿರುವ ಮೌನವೇ 
ಮಾತಾಡು ಬಾರಾ
ಕೆನ್ನೆಯ ಚುಂಬಿಸಿರುವ ಕಣ್ಣಿರೇ
ನಿನ್ನ ಕಥೆ ಹೇಳು ಬಾರಾ

ಕಾರಿರುಳಾ ಮೌನ ಮಾತಾಗುವ ಮಾತುoಟೇ 
ಕಣ್ಣಿರು  ಕಥೆ ಹೇಳಿದ ಕಥೆಯುoಟೇ
ದುಃಖ ಮರೆಸುವ ಮನವ ಬಯಸಿದರೆ
ದುಃಖದ ಮಡುವಲ್ಲಿ ಸಾಯುತಿರುವನ ಗೆಳೆತನ ಸಿಕ್ಕಿತೇ????!!! 

ಮುಸ್ಸಂಜೆಯ ಇರುಳಲ್ಲಿ ಜಿಟಿ ಜಿಟಿ ಮಳೆಯಲ್ಲಿ
ಮನೆಯ ಮೂಲೆಯಲ್ಲಿ  ಗೋಡೆಗಾನಿಸಿ
ಕುಳಿತು ಮನವ ಬರಿದು ಮಾಡಿಕೊಳ್ಳುತಿರುವ
ನಿನ್ನ  ದುಃಖಕ್ಕೆ ಏರುಳೆ ಸಾಕ್ಷಿ!!!!

ಜಲ್ಲನೆ ಮಿಂಚುವ ಮಿಂಚಿಗೆ
ಗಕ್ಕನೆ ಬೆದರಿ ಕಣ್ಣಿರುವರೆಸಿಕೊಳ್ಳುವ
ತನಗೆ ತಾನೇ ಸಮಾಧನಿಸಿಕೊಳ್ಳುವ
ಮನ ಇನಿಯನ ಪ್ರೆತಿಯ ಬಯಸಿತ್ತೆ ???

ಮರಗುಟ್ಟುವ ಚಳಿಯಲ್ಲಿ
ಮೆತ್ತನೆಯ ಶಾಲಹೊದ್ದು
ಗೆಳೆಯನಿಗಾಗಿ ಕಾದ ಚಳಿಗಾಲವೆಷ್ಟೂ
ನೀ ಬರದೆ ಹೋದೆನೆಂದು ಶಪಿಸಲಾರೆ!!!!

ಬೇಸಿಗೆಯ ಬೇಗೆಯಲ್ಲಿ
ನಿನ್ನ ಬೆಸುಗೆಯ ನೆನಪಾಗಿ ಮೈ ಬೆವೆತರು
ಬಿಸಿಲ ಬೇಗೆ ಗೆಂದು ಮನ ಸಮಾದಾನಿಸಿದ

ಗಳಿಗೆಗದರೂ ಮನ ನಿನ್ನ ಹಂಬಲಿಸದೇ ಇನಿಯಾ ????

Thursday 17 October 2013

ಆದ್ರೂ  ಅವನೀಲ್ಲದೆ ಅವಳಿಲ್ಲಾ



                ಮದುವೆಯಾಗಿ ಎರಡು ವರ್ಷವಾದರೂ  ಇನ್ನೂ  ನನ್ನನ್ನು ಅರ್ಥ ಮಾಡ್ಕೊಂದಿಲ್ಲಾ ಯಾವಗ ಅರ್ಥ ಮಾಡ್ಕೋತಿಯೋ ಎಂದು ಒಂದೇ  ಸಮನೆ ರೇಗುತಿದ್ದ. ‘ನೀನು ನನ್ನನೆಸ್ಟು ಅರ್ಥ ಮಾಡ್ಕೊಂಡಿದಿಯಾ?’  ಅಂತಾ ತಿರುಗಿ ಕೇಳಿದವಳ ಕಣ್ಣಲ್ಲೋ ಕಣ್ಣಿರ ಧಾರೆ!                                                                                                                                                                                                                                                                                      
                    ತಾನು  ಅತ್ತರೆ ಗಂಡ ಎದೆಗವಚಿಕೊಂಡು  ಸಮಾಧಾನ ಮಾಡಬೇಕು, ಕಣ್ಣಿರನ್ನು ಒರೆಸಿ, ತನ್ನನ್ನು ತಬ್ಬಿಕೊಳ್ಳಬೇಕು,  ಎಂಬ ಅವಳ ಆಸೆಗೆ  ಮದುವೆಯಾದ ಸ್ವಲ್ಪ ದಿನದಲ್ಲೇ ಮನದಟ್ಟಾಗಿತ್ತು, ಅವನಿಗೋ ಕಣ್ಣಿರನ್ನು ಕಂಡರೆ ಕೆಂಡದಂಥ ಕೋಪ. ತಕ್ಷಣ ಅವಳು ಮುಖ ತೊಳೆದುಕೊಂಡು ಬರಬೇಕು, ಇಲ್ಲಾಂದ್ರೆ ಪುನಃ ಬೈತಾನೆ. ಮುಖ ತೊಳೆಯುವ ನೆಪ ಮಾಡಿಕೊಂಡು ಗಂಟೆಗಟ್ಟಲೆ ಬಾತರೂಮಲ್ಲಿ ಅಳುತ್ತಾ ಕುತಿರ್ತಾಳೆ .                                                                                                    
              ಸಂಜೆ ಆಫೀಸ್ನಿಂದ ಮನೆ ಬಂದ ನಂತರ ಗಂಡನೊಂದಿಗೆ ಹರಟುವ ಕನಸು ಕಂಡವಳಿಗೆ ಕನಸೊಂದೇ ಜೋತೆಯಾಗಿರತ್ತೆ, ಅವನ ದಿನಚರಿಯೇ ಅದು ಬರೋದು ಲೇಟ್ ಆದ್ರೆ ಟೀವಿ ನೋಡೋದು ಇಲ್ಲಾಂದ್ರೆ ಅವನ ಡೆಲ್ ಲಾಪಿ ಅವನಿಗಾಗಿ ಕಾದಿರತ್ತೆ ಅದನ್ನು ನೋಡಿದವಳಿಗೆ ಮೈಯೆಲ್ಲಾ ಉರಿದು ಹೋಗತ್ತೆ,  ಅದಕ್ಕಾಗಿ ಅವಳು ಸಿರಿಯಲ್ಸ್ ನೋಡೋಕೆ ಶುರು ಮಾಡಿದ್ದಾಳೆ , ಇವತ್ತಾಗಿದ್ದು ಅದೇ ಅದಕ್ಕೆ ಈ ಜಗಳ ಹಾಗಂತ ಅವರಿಬ್ಬರಲ್ಲಿ ಪ್ರೀತಿ ಇಲ್ಲಂಥಾ ಅಲ್ಲಾ ಖಂಡಿತಾ ಇದೆ ಬೆಟ್ಟದಷ್ಟು.                                                                                                                                                                    
               ಆದ್ರೆ ಅದರ ಮದ್ಯೆ ಇಗೋ ಬಂದು ನಿಂತಿದೆ . ಅವಳೋ ಭಾವನಾ ಜೀವಿ  ಅವನಿಗೆ ಭಾವನೆಗಳನ್ನು ವ್ಯಕ್ತ ಪಡಿಸೋದು ಗೊತ್ತಿಲ್ಲಾ ಅದೇ ಅವರಿಬ್ಬರ ಪ್ರಾಬ್ಲಮ್ . ಆವಳ ಚಿಕ್ಕ ಪುಟ್ಟ ಸಂತೋಷಗಳಲ್ಲಿ ಅವನೂ ಪಾಲ್ಗೊಳ್ಳಬೇಕು, ಸಣ್ಣದೊಂದು ನೋವಾದರೂ ತಬ್ಬಿ ಸಂತೈಸಬೇಕು, ಮಾತು ಮಾತಿಗೂ ರಮಿಸಬೇಕು, ಕೋಪ ಬಂದಾಗ ಪುಟ್ಟದೊಂದು ಚಾಕಲೇಟ್ ಜೋತೆ ಒಲೈಸಬೇಕು, ರಜಾ ದಿನಗಳಲ್ಲಿ ತನಗೆ ಅಂಟಿಕೊಂಡಿರಬೇಕು, ಇಂತಹ ಅದೇಷ್ಟೋ ಮಿನಿ ಆಸೆಗಳು ಇಡೇರುವ ದಿನಕ್ಕಾಗಿ ಕಾಯುತಿದ್ದಾಳೆ,,  ಚಾತಕ ಪಕ್ಷಿಯಂತೆ... ವೀಕ್ ಎಂಡ್ಗಳಲ್ಲಿ ಗಂಡ ಪಕ್ಕದಲ್ಲಿದ್ರು, ಕಾಡುವ ಒಂಟಿತನ ಯಾವ ಶತ್ರುಗಳಿಗೂ ಬೇಡ ಎಂದುಕೊಳ್ಳುತ್ತಾಳೆ,  ಗಂಡ ಟೀವಿ ನೋಡುತ್ತಿದ್ದರೆ ಪವರ್ ಕಟ್ ಯಾವಾಗ ಮಾಡ್ತಾರೋ ಅಂದುಕೊಳ್ತಾಳೆ, ಅದನ್ನೆಲ್ಲಾ ಅವನಲ್ಲಿ ಹೇಳಿಕೊಂಡಿದ್ದಾಳೆ ಕೂಡ,                                                                                                                                                                                                                                                   
                   ಇಷ್ಟೇಲ್ಲಾ ಆದರೂ ಒಂದೇ ಒಂದು ದಿನ ಅವನನ್ನು ಬಿಟ್ಟೀರಲಾರದಷ್ಟು ಪ್ರೀತಿ “ ಅವನಿಲ್ಲದೇ ಅವಳಿಲ್ಲಾ ’’

 ಅವನೊಬ್ಬ ಪರ್ಫೆಕ್ಟ್ ಗಂಡ ಆದರೆ ಅವನಲ್ಲಿ ಸ್ನೇಹಿತನನ್ನು  ಹುಡುಕುತ್ತಿರುವ ಅವಳ ಹುಡುಕಾಟಕ್ಕೆ ಕೊನೆಯೆಂದೋ???????

Sunday 11 August 2013

ಮುಂಗಾರು ಮಳೆಯೇ ,,,,,,,,,,,, ಏನು ನಿನ್ನ ಹನಿಗಳ ಲೀಲೆ

         ಮಳೆಯ ಹನಿಯ ಲೀಲೆಯನ್ನು ಅರಿತವರ್ಯಾರೋ !!!!!!!!!! ಎದೆ ಮುಗಿಲಿನಿಂದ ಮುಂಗರುಮಳೆಯಂತೆ ನೆನಪುಗಳು ರಭಸವಾಗಿ ಸುರಿಯುತ್ತಿವೆ, ಅದಕ್ಕೆ ಮನಸೆಂಬ ಕಾನನದಲ್ಲಿನ ಮರಗಳ ಹೊಯ್ದ್ದಾಟಕ್ಕೆ ದುಃಖ ಒತ್ತರಿಸಿಕೊಂಡು ಬರುತ್ತದೆ .  ಕ್ಷುಲ್ಲಕ  ಕಾರಣ ಹೇಳಿ  ಗೆಳೆತನಕ್ಕೆ ಮಂಗಳ ಹಾಡಿದ್ದು ಮನಸನ್ನು ಹಿಂಡಿ ಹಾಕತ್ತೆ .
            ಇಂತಹದೇ ಒಂದು ಮಳೆಗಾಲದಲ್ಲೇ ಅಲ್ಲವೇ ನಾನು ಅವಳು ಒಳ್ಳೆಯ ಗೆಳಯ ಗೆಳತಿಯರಾಗಿದ್ದು, ಒಂದೇ ಕೊಡೆಯಲ್ಲಿ ಕೈ ಕೈ ಹಿಡಿದು ಧಾರವಾಡದ ಬೀದಿ ಬೀದಿ ಸುತ್ತಿದ್ದು, ಪಾನಿಪೂರಿ ಅಂಗಡಿಗೆ ಲಗ್ಗೆ ಇಟ್ಟಿದ್ದು, ನೋಡುಗರ ಕಣ್ಣಿಗೆ ಪ್ರೇಮಿಗಳಂತೆ ಕಾಣಿಸಿದ್ದು , ಫ್ರೆಂಡ್ಸ್ ಸರ್ಕಲ್ ಅಲ್ಲಿ ಅಸೂಯೆಗೆ ಒಳಗಾಗಿದ್ದು, ನಾನೆಷ್ಟೇ ಕಾಡಿದರು, ಕೀಟಲೆ ಮಾಡಿದರೂ , ಸಹಿಸಿಕೊಂಡ “ಸಹನಾ”ಮೂರ್ತಿ. ನನ್ನ ತಪ್ಪುಗಳನ್ನು ತಿದ್ದಿ ಒಳ್ಳೆಯ ಗೆಳತಿಯಾದವಳು. “ಯಾರು ಏನೇ ಹೇಳಲಿ ನೀ ನನ್ನ ಬೆಸ್ಟ್ ಫ್ರೆಂಡ್ ಕಣೋ ಯಾವತ್ತೂ ನಿನ್ನಾ ನನ್ನ ಲೈಫಿಂದ ದೂರ ಮಾಡ್ಕೊಳಲ್ಲಾ ಎಂದವಳು ಹಾಗೆ ದೂರವಾಗಿ ಬಿಟ್ಟಿದ್ದಳು.
                 ಇದಕ್ಕೆಲ್ಲಾ ಕಾರಣ ಲವ್. ಹೌದು ಅವಳು ಒಬ್ಬನ್ನನ್ನು ತುಂಬಾ ಪ್ರೀತಿಸುತಿದ್ದಳು, ಅವನು ಕೂಡ ಅವಳನ್ನು ಅಷ್ಟೇ ಇಷ್ಟಾ ಪಡ್ತಾ ಇದ್ದ.  ಅವನು ಪೊಸೆಸಿವ್ ಕಣೋ ನಾನು ಯಾರ ಹತ್ರಾನೂ ಫ್ರೀಯಾಗಿರೋದು ಅವನಿಗೆ ಇಷ್ಟ ಆಗಲ್ಲ ಬೈತಾನೆ ಅಂದಿದ್ಲು ಹೀಗೆ ಒಮ್ಮೆ ಮಾತಾಡುತ್ತಾ ಕುಳಿತಾಗ ಆನಂತರ ಹೆಚ್ಚು ಬೇಟಿ ಕೂಡ ಆಗಿರಲಿಲ್ಲ . ಸಂತೋಷವನ್ನು ಮಾತ್ರ ಹಂಚಿಕೊಂಡು ಹೆಚ್ಚಿಸಿಕೊಳ್ಳಬೇಕು ದುಃಖನಲ್ಲಾ ಅಂತಿದ್ಲು  ಯಾವಾಗಲೂ ಹಾಗೇ ಅವಳ ಹುಡುಗ ನನ್ನ ವಿಷಯಕ್ಕಾಗಿ ಅವಳೊಂದಿಗೆ ಜಗಳವಾಡಿದ್ದನ್ನು ಮುಚ್ಚಿಟ್ಟಿದ್ದಳು ಅವಳ ಗೆಳತಿಯ ಕಡೆಯಿಂದ ನನಗೆ ತಿಳಿಯಿತು.
               ಇದೇ ಟೈಮಲ್ಲಿ ಅವಳ ಕಸಿನ್ ಊರಿಂದ ಬಂದಿದ್ದ, ನನಗೂ ಪರಿಚಯಿಸಿದ್ದಳು, ನನಗೋಸ್ಕರ ಏನೆಲ್ಲಾ ಮಾಡಿಲ್ಲ ಅವಳು ಸೋ ಅವಳಿಗಾಗಿ ನನ್ನ ಫ್ರೆಂಡ್ಶಿಪ್ನ ಬಿಟ್ಟಕೊಡಲು ರೆಡಿ ಆಗಿ, ಒಂದು ಪ್ಲಾನ್ ಮಾಡಿದೆ . ಅವಳೊಂದಿಗೆ ಜಗಳ ಮಾಡಿದೆ ನಿನ್ನ ಕಸಿನ್ ಬಂದಾಗಿನಿಂದ ನಂಗೆ ಕಾಲ್ ಮೆಸೇಜ್ ಎಲ್ಲಾ ಕಡ್ಮೆ ಮಾಡಿದಿಯಾ? ಈಗ ನಿಂಗೆ ನಾನು ನನ್ನ ಗೆಳೆತನ ಬೇಡವಾಗಿದೆ ಅಂತೆಲ್ಲಾ ಬೈದೆ, ಪಾಪ ಕಣ್ಣಲ್ಲಿ ನೀರು ತುಂಬಿಕೊಂಡುಹಾಗೆಲ್ಲ ಹೇಳಬೇಡ ಕಣೋ ತುಂಬಾ ನೋವಗತ್ತೆಅಂದಿದ್ಲು
                       ನಾನು ಕೇರ್ ಮಾಡದೇ ಮತ್ತೂ ಬೈತಾನೆ ಇದ್ದೆ  . ನಂಗೆ ಕಾಲ್ ಮಾಡಬೇಡ, ಮೆಸೇಜ್ ಮಾಡಬೇಡ, ಕಾಂಟಾಕ್ಟ್ ಮಾಡಬೇಡ ಅಂದಿದ್ದೆ . ಅತ್ತುಕೊಂಡು ಹೋಗಿದ್ಲು ಪಾಪ !!!! ಆನಂತರ ಅವನ್ನು ಮೀಟ್ ಮಾಡಿರಲಿಲ್ಲ ಫೋನ್ ಕಾಲ್ , ಮೆಸೇಜ್  ಯಾವುದಕ್ಕೂ ರೆಸ್ಪಾನ್ಸ್ ಮಾಡಿರಲಿಲ್ಲ . ಬೆಕಂತಾನೆ aviod  ಮಾಡ್ದೆ, ನನ್ನ ನೋವನ್ನ ಸಹಿಸಿಕೊಂಡೆ .
                       ಇದೆಲ್ಲಾ ಆಗಿದ್ದು 2009 ರಲ್ಲಿ ಈಗ ಅವಳು ಮದುವೆಯಾಗಿ ಕುಶಿ ಕುಶಿಯಾಗಿದ್ದಾಳಂತೆ, ಮೊನ್ನೆ ಅವಳ ಫ್ರೆಂಡ್ ಸಿಕ್ಕಿದ್ಲು ಫೋರಮ್ ಮಾಲ್ ಅಲ್ಲಿ, ಅವಳು  ಹೇಳಿದ್ಲು. ನಾನು ಬಯಸಿದ್ದು ಅದೇ ತಾನೇ !!!!!!!

  ಆದರೆ ಮಳೆಹನಿಯೊಂದಿಗೆ ಬರುವ ಅವಳ ನೆನೆಪು ಮನವೆಂಬ ಕಪ್ಪೆ ಚಿಪ್ಪಲ್ಲಿ ಮುತ್ತಾಗಿ ಕುಳಿತಿದೆ