Sunday, 11 August 2013

ಮುಂಗಾರು ಮಳೆಯೇ ,,,,,,,,,,,, ಏನು ನಿನ್ನ ಹನಿಗಳ ಲೀಲೆ

         ಮಳೆಯ ಹನಿಯ ಲೀಲೆಯನ್ನು ಅರಿತವರ್ಯಾರೋ !!!!!!!!!! ಎದೆ ಮುಗಿಲಿನಿಂದ ಮುಂಗರುಮಳೆಯಂತೆ ನೆನಪುಗಳು ರಭಸವಾಗಿ ಸುರಿಯುತ್ತಿವೆ, ಅದಕ್ಕೆ ಮನಸೆಂಬ ಕಾನನದಲ್ಲಿನ ಮರಗಳ ಹೊಯ್ದ್ದಾಟಕ್ಕೆ ದುಃಖ ಒತ್ತರಿಸಿಕೊಂಡು ಬರುತ್ತದೆ .  ಕ್ಷುಲ್ಲಕ  ಕಾರಣ ಹೇಳಿ  ಗೆಳೆತನಕ್ಕೆ ಮಂಗಳ ಹಾಡಿದ್ದು ಮನಸನ್ನು ಹಿಂಡಿ ಹಾಕತ್ತೆ .
            ಇಂತಹದೇ ಒಂದು ಮಳೆಗಾಲದಲ್ಲೇ ಅಲ್ಲವೇ ನಾನು ಅವಳು ಒಳ್ಳೆಯ ಗೆಳಯ ಗೆಳತಿಯರಾಗಿದ್ದು, ಒಂದೇ ಕೊಡೆಯಲ್ಲಿ ಕೈ ಕೈ ಹಿಡಿದು ಧಾರವಾಡದ ಬೀದಿ ಬೀದಿ ಸುತ್ತಿದ್ದು, ಪಾನಿಪೂರಿ ಅಂಗಡಿಗೆ ಲಗ್ಗೆ ಇಟ್ಟಿದ್ದು, ನೋಡುಗರ ಕಣ್ಣಿಗೆ ಪ್ರೇಮಿಗಳಂತೆ ಕಾಣಿಸಿದ್ದು , ಫ್ರೆಂಡ್ಸ್ ಸರ್ಕಲ್ ಅಲ್ಲಿ ಅಸೂಯೆಗೆ ಒಳಗಾಗಿದ್ದು, ನಾನೆಷ್ಟೇ ಕಾಡಿದರು, ಕೀಟಲೆ ಮಾಡಿದರೂ , ಸಹಿಸಿಕೊಂಡ “ಸಹನಾ”ಮೂರ್ತಿ. ನನ್ನ ತಪ್ಪುಗಳನ್ನು ತಿದ್ದಿ ಒಳ್ಳೆಯ ಗೆಳತಿಯಾದವಳು. “ಯಾರು ಏನೇ ಹೇಳಲಿ ನೀ ನನ್ನ ಬೆಸ್ಟ್ ಫ್ರೆಂಡ್ ಕಣೋ ಯಾವತ್ತೂ ನಿನ್ನಾ ನನ್ನ ಲೈಫಿಂದ ದೂರ ಮಾಡ್ಕೊಳಲ್ಲಾ ಎಂದವಳು ಹಾಗೆ ದೂರವಾಗಿ ಬಿಟ್ಟಿದ್ದಳು.
                 ಇದಕ್ಕೆಲ್ಲಾ ಕಾರಣ ಲವ್. ಹೌದು ಅವಳು ಒಬ್ಬನ್ನನ್ನು ತುಂಬಾ ಪ್ರೀತಿಸುತಿದ್ದಳು, ಅವನು ಕೂಡ ಅವಳನ್ನು ಅಷ್ಟೇ ಇಷ್ಟಾ ಪಡ್ತಾ ಇದ್ದ.  ಅವನು ಪೊಸೆಸಿವ್ ಕಣೋ ನಾನು ಯಾರ ಹತ್ರಾನೂ ಫ್ರೀಯಾಗಿರೋದು ಅವನಿಗೆ ಇಷ್ಟ ಆಗಲ್ಲ ಬೈತಾನೆ ಅಂದಿದ್ಲು ಹೀಗೆ ಒಮ್ಮೆ ಮಾತಾಡುತ್ತಾ ಕುಳಿತಾಗ ಆನಂತರ ಹೆಚ್ಚು ಬೇಟಿ ಕೂಡ ಆಗಿರಲಿಲ್ಲ . ಸಂತೋಷವನ್ನು ಮಾತ್ರ ಹಂಚಿಕೊಂಡು ಹೆಚ್ಚಿಸಿಕೊಳ್ಳಬೇಕು ದುಃಖನಲ್ಲಾ ಅಂತಿದ್ಲು  ಯಾವಾಗಲೂ ಹಾಗೇ ಅವಳ ಹುಡುಗ ನನ್ನ ವಿಷಯಕ್ಕಾಗಿ ಅವಳೊಂದಿಗೆ ಜಗಳವಾಡಿದ್ದನ್ನು ಮುಚ್ಚಿಟ್ಟಿದ್ದಳು ಅವಳ ಗೆಳತಿಯ ಕಡೆಯಿಂದ ನನಗೆ ತಿಳಿಯಿತು.
               ಇದೇ ಟೈಮಲ್ಲಿ ಅವಳ ಕಸಿನ್ ಊರಿಂದ ಬಂದಿದ್ದ, ನನಗೂ ಪರಿಚಯಿಸಿದ್ದಳು, ನನಗೋಸ್ಕರ ಏನೆಲ್ಲಾ ಮಾಡಿಲ್ಲ ಅವಳು ಸೋ ಅವಳಿಗಾಗಿ ನನ್ನ ಫ್ರೆಂಡ್ಶಿಪ್ನ ಬಿಟ್ಟಕೊಡಲು ರೆಡಿ ಆಗಿ, ಒಂದು ಪ್ಲಾನ್ ಮಾಡಿದೆ . ಅವಳೊಂದಿಗೆ ಜಗಳ ಮಾಡಿದೆ ನಿನ್ನ ಕಸಿನ್ ಬಂದಾಗಿನಿಂದ ನಂಗೆ ಕಾಲ್ ಮೆಸೇಜ್ ಎಲ್ಲಾ ಕಡ್ಮೆ ಮಾಡಿದಿಯಾ? ಈಗ ನಿಂಗೆ ನಾನು ನನ್ನ ಗೆಳೆತನ ಬೇಡವಾಗಿದೆ ಅಂತೆಲ್ಲಾ ಬೈದೆ, ಪಾಪ ಕಣ್ಣಲ್ಲಿ ನೀರು ತುಂಬಿಕೊಂಡುಹಾಗೆಲ್ಲ ಹೇಳಬೇಡ ಕಣೋ ತುಂಬಾ ನೋವಗತ್ತೆಅಂದಿದ್ಲು
                       ನಾನು ಕೇರ್ ಮಾಡದೇ ಮತ್ತೂ ಬೈತಾನೆ ಇದ್ದೆ  . ನಂಗೆ ಕಾಲ್ ಮಾಡಬೇಡ, ಮೆಸೇಜ್ ಮಾಡಬೇಡ, ಕಾಂಟಾಕ್ಟ್ ಮಾಡಬೇಡ ಅಂದಿದ್ದೆ . ಅತ್ತುಕೊಂಡು ಹೋಗಿದ್ಲು ಪಾಪ !!!! ಆನಂತರ ಅವನ್ನು ಮೀಟ್ ಮಾಡಿರಲಿಲ್ಲ ಫೋನ್ ಕಾಲ್ , ಮೆಸೇಜ್  ಯಾವುದಕ್ಕೂ ರೆಸ್ಪಾನ್ಸ್ ಮಾಡಿರಲಿಲ್ಲ . ಬೆಕಂತಾನೆ aviod  ಮಾಡ್ದೆ, ನನ್ನ ನೋವನ್ನ ಸಹಿಸಿಕೊಂಡೆ .
                       ಇದೆಲ್ಲಾ ಆಗಿದ್ದು 2009 ರಲ್ಲಿ ಈಗ ಅವಳು ಮದುವೆಯಾಗಿ ಕುಶಿ ಕುಶಿಯಾಗಿದ್ದಾಳಂತೆ, ಮೊನ್ನೆ ಅವಳ ಫ್ರೆಂಡ್ ಸಿಕ್ಕಿದ್ಲು ಫೋರಮ್ ಮಾಲ್ ಅಲ್ಲಿ, ಅವಳು  ಹೇಳಿದ್ಲು. ನಾನು ಬಯಸಿದ್ದು ಅದೇ ತಾನೇ !!!!!!!

  ಆದರೆ ಮಳೆಹನಿಯೊಂದಿಗೆ ಬರುವ ಅವಳ ನೆನೆಪು ಮನವೆಂಬ ಕಪ್ಪೆ ಚಿಪ್ಪಲ್ಲಿ ಮುತ್ತಾಗಿ ಕುಳಿತಿದೆ

Wednesday, 23 November 2011

ನಾನಾಗಬಹುದೇ??!!


ಹಕ್ಕಿಯಂತೆ ಬಾನಲ್ಲಿ ಹಾರಿ
ಚುಕ್ಕಿನ ಮುಟ್ಟಬಹುದೆ?
ಸಮುದ್ರದಾಳಕ್ಕೆ ಈಜಿ
ಕಪ್ಪೆ ಚಿಪ್ಪಲ್ಲಿ ಹುದುಗಬಹುದೇ?

ಕಾನನದ ಹಸಿರೆಲೆಗಳ
ಹಸಿರು ನಾನಾಗಬಹುದೆ?
ಗರಿಬಿಚ್ಚಿ ಕುಣಿಯುವ ನವಿಲ
ನಾಟ್ಯದ ವಯ್ಯಾರ ನಾನಾಗಬಹುದೆ?

ಇಂಪಾಗಿ ಸ್ವರ ಹೊಮ್ಮಿಸುವ
ಕೊಳಲ ದನಿ ನಾನಾಗಬಹುದೆ?
ತಕಧಿಮಿ ತೋಂ ಎಂದು ಕುಣಿವ
ನಾಟ್ಯರಾಣಿಯ ಗೆಜ್ಜೆ ನಾನಾಗಬಹುದೆ?

ಅತ್ತಿಂದಿತ್ತ ಹಾರುವ ಚಿಟ್ಟೆಯ
ರೆಕ್ಕೆಯ ಬಣ್ಣ ನಾನಗಬಹುದೇ?
ಕಣ್ಣ ಕೊಳದಿ ಈಜಾಡುವ
ಬಿಳಿಯ ಮೀನು ನಾನಾಗಬಹುದೆ/

ಪುಟಾಣಿ ಮಗುವಿನ ಹೆಜ್ಜೆಯ
ಒಲಾಟದ ಸೊಗಸು ನಾನಾಗಬಹುದೆ?
ಅದು ನುಡಿವ ತೊದಲು ಮಾತಿನ
ಸವಿ ಸವಿಯಬಹುದೇ?




Tuesday, 22 November 2011

ಪರಿಸರ





ನಮ್ಮ ಸುತ್ತಲಿರುವ ಪರಿಸರ ನೀನೆಷ್ಟು ಸುಂದರ 
ಹಸಿರ ಉಟ್ಟು ಹೂ ಮೂಡಿದ ನೀ ಸುಮಧುರ 
ನೀ ಸಕಲ ಜೀವ ರಾಶಿಗಳೆಲ್ಲದರ ಆಗರ 
ನೆನ್ನಲ್ಲಿಹುದು ಖನಿಜ ಸಂಪನ್ಮೂಲಗಳ ಭಂಡಾರ 

ನದಿ ಹೊಳೆ - ಹಳ್ಳಗಳೆಂಬ ಹಾರ ತೊಟ್ಟು 
ಪಶು - ಪಕ್ಷಿ - ಮನುಷ್ಯರೆಂಬ ಮಕ್ಕಳ ಹೆತ್ತು 
ನಿನ್ನ ಜೀವನವನ್ನು ಇವರಿಗಾಗಿಯೇ ಮುಡಿಪಾಗಿಟ್ಟು
ಬದುಕಿರುವಂತಿದೆ ನೋವನೆಲ್ಲ ಮರೆತು ಬಿಟ್ಟು 

ಭೂಮಾತೆ ನಿನ್ನ ಕೋಮಲ ಚರಣಗಳಿಗೆ 
ವಂದಿಸಿದ್ದರಿಂದಾಯ್ತು ಸಂತಸ  ತನುಮನಗಳಿಗೆ
ನಿನ್ನ ನೋಡುತಿದ್ದಂತೆ ನನ್ನ ನಾ ಮರೆತೇ ಒಂದುಗಳಿಗೆ 
ಕನಸಿನ ಲೋಕದಲ್ಲಿ ವಿಹರಿಸಿದೆನಾ ಆ ಗಳಿಗೆ 

Tuesday, 4 October 2011

ಹೀಗೊಂದು ಅನಾಮಿಕ ಗೆಳತಿ ?????????

ಹೌದು ನಾನು ಅವಳು ಬರಿ ಫ್ರೆಂಡ್ಸ್ ಅಲ್ಲ ಆತ್ಮೀಯರು ಆದರೆ ನಾನು ಅವಳನ್ನು ನೋಡೇ ಇಲ್ಲಾ,?????
ಅವಳು ಫೋನ್ ಸುಂದರಿ ಅರ್ಥ ಆಗಿಲ್ವಾ? ಫೋನೂ ಫ್ರೆಂಡ್ ಅಂತ ನಮ್ಮಿಬ್ಬರ ಫ್ರಿಎನ್ದ್ಶಿಪ್ ಬರೆ ಫೋನ್ ನಲ್ಲಿ ಮಾತ್ರ ಊರು ಜಾತಿ ಏನೇನು ಗೊತ್ತಿಲ್ಲ ನಮಗದು ಬೇಕಾಗಿಯೂ ಇಲ್ಲಾ. ಎಲ್ಲಾ ವಿಷಯಗಳನ್ನೂ ಹಂಚಿಕೊಳ್ಳುತ್ತಿವಿ. ಇಬ್ಬರಲ್ಲಿ ಒಬ್ಬರಿಗೂ ನಮ್ಮಿಬ್ಬರ ಖಾಸಗಿ ವಿಷಯಗಳನ್ನು ತಿಳಿದುಕೊಳ್ಳಬೇಕೆಂದು ಅನಿಸಲಿಲ್ಲ. ಇಲ್ಲಿ ಅದು ಮಹತ್ವದ ವಿಷಯವು ಅಲ್ಲ ಬೇಟಿಯಗಬೇಕೆಂದು ಯಾವತ್ತು ಅನಿಸಲಿಲ್ಲ ಮಾತಾಡಿದ ಕೊಡಲೇ ನನ್ನ ಮನಸ್ಸಿಗೆ ಅನ್ನಿಸಿತ್ತು ಯಾವುದು ಜನ್ಮದ ಬಂಧವೆಂದು. ನಮ್ಮ ನೋವು ನಲಿವುಗಳನ್ನು ಸಮಾನವಾಗಿ ಹಂಚಿಕೊಂಡು ಅತ್ತಿದ್ದೇವೆ, ಕುಣಿದು ಕುಪ್ಪಳಿಸಿದ್ದೇವೆ, ಈ ಬಂಧನಕ್ಕೆ ಯಾವ ಹೆಸರಿಡೋಣ ನೀವೇ ಹೇಳಿ?  

Wednesday, 28 September 2011

ಮಳೆಯ(ನದ) ಕಾರ್ಮೋಡ


ಬಾನಿನ ತುಂಬೆಲ್ಲಾ
ತುಂಬಿಹುದು ಕರಿಮೋಡ 
ಅದು ಭೂಮಿಯ ತಂಪು 
ಮಾಡುವುದು ನೋಡ???


ಮನದಲ್ಲಿ ತುಂಬಿಹೆ
ಚಿಂತೆಯ ಕಾರ್ಮೋಡ 
ಅದು ತೋರುವುದು 
ಚಿತೆಗೆ ದಾರಿಯ ನೋಡ!!!!!


ಕರಿ ಮುಗಿಲ ನೋಡು 
ಜೊತೆಗೆ ಧ(ರ)ಣಿಯಾ ನಗು 
ಕಪ್ಪು ಮೆಘದೊಳಗಿಂದ 
ಇನುಕುವನು ಬಿಳಿ ಚಂದ್ರ!!!!!? 


ಮನಸು ತಿಳಿಯಾಗಲಿಲ್ಲ 
ಬರಿಯ ಯೋಚನೆಯಿಂದ 
ಮಂಕಾದ ಮುಖದಲ್ಲಿ 
ಇಣುಕಲೂ ಇಲ್ಲ ಕಿರುನಗೆ!!!!!!


ಕಪ್ಪು ಮೋಡದಿಂದ ಮಳೆ 
ಚಿಂತೆಯಿಂದ ಕಣ್ಣಿರು 
ಮಳೆ ಬಂದರೆ ಕುಣಿವರು ಜನ 
ಕಣ್ಣಿರಿಂದೇಕೆ ನೆನೆವುದೋ ಮನ??!!!!!

ಮಳೆ


ಕತ್ತಲೆಯ ಕಾರ್ಮೋಡ ಕವಿದು 
ಆಗಿದೆ ಮನವೆಲ್ಲ ಚಿಂತೆಯ ಗೂಡು 
ಹಣ್ಣಾದೆ ನಿನ್ನ ನೆನೆ ನೆನೆದು 
ಹೇಗಿರುವೆ ನನ್ನ ಪ್ರಿಯ ವಧು?


ಇರುಳ ಕರಿ ಪರದೆ ಸರಿಸಿ 
ಅಮೃತದೊಲವಾ ಹರಿಸಿ 
ನಿನ್ನ ಪ್ರಿಯನನ್ನಾಲಂಗಿಸು
ಸಿಹಿ ಮುತ್ತ ನೀಡಿ 


ಚಂದ್ರನ ಮುತ್ತಿರುವ ತಾರೆಯಂತೆ 
ನಿನ್ನಿ ವದನದ ಸುತ್ತ ಮುಂಗುರುಳು 
ಹೂವ ಮುತ್ತಿಕ್ಕುವ ದುಂಬಿಯಂತೆ 
ನಿನ್ನ ಮುಖಕ್ಕೆ ನನ್ನೀ ಮುತ್ತುಗಳು 


ಹಗಲು ಇರುಳುಗಳು ಪ್ರಕೃತಿಯಾಟ
ನೋವು ನಲಿವುಗಳಲ್ಲಿ ಬಾಳಿನ ಪುಟ 
ಹೀಗೆ ಕಳೆದವೆಷ್ಟೋ ಸಂವತ್ಸರ 
ನಿನ್ನ ಈ ಎಲ್ಲ ನೆನಪುಗಳು ಅಮರ

ಮಧುರ ನೆನಪು


ಎದೆಯ ಕಡಲಿನಿಂದ 
ಹೊಮ್ಮಿದ ಮಧುರ ನೆನಪು 
ಜೀವನದ ಕಹಿ ವೇಳೆಯಲಿ 
ಜೊತೆಗಿರುವ ಸಿಹಿ ನೆನಪು 


ಸೂರ್ಯ ರಶ್ಮಿ ಸೋಕಿ 
ಮಂಜು ಕರಗುವಂತೆ 
ನೆನೆಪಿನಾಳದ ನೆನೆಪಿಂದ 
ಮರೆಯಿತೊಂದು ಕ್ಷಣ ನೋವು 


ನೆನಪ ಎಳೆಯ ಎಳೆದಾಗ 
ನೆನಪಾಗುವುದು ಮನದಲ್ಲಿ 
ಬಾಲ್ಯದ ತುಂಟಾಟಗಳು 
ಮಸುಕಾದ ನೆನೆಪುಗಳು 


ಗೆಳೆತಿಯರ ಜೊತೆಗೂಡಿ  ಆಡಿದ 
ಗೆಳೆಯರ ಜೊತೆ ಜಗಳ ಕಾದ
ಮರೆಯಲಾಗದ ಸವಿನೆನಪುಗಳ 
ಸಂಗ್ರಹವೇ ನಮ್ಮ ಬಾಳು

ನಿನ್ನ ನೆನಪು

ನಿನ್ನ ನೆನಪು ಸ್ಪೂರ್ತಿ ಏನಗೆ
ಬಾಳ ಕಥೆ ಬರೆಯಲು
ನಿನ್ನ ಮಾತು ಅಮೃತ ಸಿಂದು
ಸ್ನೇಹ ಪುಟದಲೂ

ನಿನ್ನ ನೋಟ ಚಿರವು
ಎನ್ನ ಕಣ್ಣಿನೊಳಗು
ನಿನ್ನ ಪ್ರೀತಿ ಅಮರ
ಎನ್ನ ಹೃದಯದೊಳಗೂ

ಮಾತಿನಲ್ಲೂ ಪ್ರೀತಿ ತೋರುವ
ನಿನ್ನ ಕಂದರೆನಗೆ ಒಲವು
ನಮ್ಮಿಬ್ಬರ ಹೃದಯ ಬೆಸೆದರೆ
ನಮ್ಮ ಪ್ರೇಮ ಎಲ್ಲಿರದು

ಆ ತುಟಿಯಂಚಿನ ಕಿರುನಗೆ
ಆ ಕಣ್ಣಂಚಿನ ತುಂಟನೋಟ
ನನ್ನೆದೆಯಲಿ ಅಳಿಯದಿರಲಿ
ನಿನ್ನನೆಂದು ನಾ ಮರೆಯದಿರಲಿ





Saturday, 24 September 2011

" ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ "

    










  ಎಷ್ಟೇ ಬೇಡವೆಂದರೂ ಒತ್ತಿಕೊಂಡು ಬರುವ ನೆನಪಿನ ಮಹಾಪುರವನ್ನು ತಡೆಯಲು ಸಾದ್ಯವೇ? ಹಾಗೆ ಬಂದ ಮಹಾಪುರದಲ್ಲಿ ಒಂದು ಬಿಂದಿಗೆಯಷ್ಟು ನೆನಪನ್ನು ನಿಮ್ಮ ಮುಂದೆ ಸುರಿಯುವ ಚಿಕ್ಕ ಪ್ರಯತ್ನ....
 
                  ಕಾಲೇಜಿಗೆ ಹೋಗಬೇಕೆಂಬ ಮಹದಾಸೆ ಹೊಂದಿದ್ದ ನೆತ್ರಕ್ಕನ ಕನಸಿಗೆ ಅವಳಪ್ಪ ತಣ್ಣಿರೆರೆಚಿದ್ದ ಟೈಲರಿಂಗ್ ಕ್ಲಾಸಿಗೆ ಸೇರಿಸಿದ್ದ. ಪಾಲಿಗೆ ಬಂದ್ದದ್ದು ಪಂಚಾಮೃತ ಎಂದುಕೊಂಡು ನೋವನ್ನು ನುಂಗಿಕೊಂಡಿದ್ದಳು. ನಾನು ಅವಳಿಗಿಂತ 2 ವರ್ಷ ಚಿಕ್ಕವಳು. ನನಗಿಂತ ದೊಡ್ಡವಳಾದರೂ, ನನ್ನ ಅತ್ಮಿಯ ಗೆಳತಿಯರ ಸಾಲಿಗೆ ಸೇರಿದ್ದಳು. 
                     
                 ನಮ್ಮ ಸ್ನೇಹಕ್ಕೆ ವಯಸ್ಸಿನ ಅಂತರ ಇರಲಿಲ್ಲ. ಹಾಗೆ 2  ವರ್ಷ ಕಳೆದು ಹೋಯಿತು. ನಾನು  ಕಾಲೇಜಿಗೆ ಹೋಗತೊಡಗಿದ್ದೆ. ವಾರಕ್ಕೊಮ್ಮೆ ಮನೆಗೆ ಬಂದಾಗ ತಪ್ಪದೆ ಅವಳನ್ನು ಬೇಟಿಯಾಗಿ ಎಲ್ಲಾ ಘಟನೆಗಳನ್ನು ವಿವರಿಸುತಿದ್ದೆ. ಅದನ್ನು ಕೇಳಿ ಕಾಲೇಜು ಜೀವನದ ಬಗ್ಗೆ ತಿಳಿದು ಕೊಳ್ಳುತ್ತಿದ್ದಳು. ಯಾವುದೇ ಹೊಸ ವಸ್ತು ಖರೀದಿಸಲಿ, ನನಗೆ ತೋರಿಸಿದೆ, ನನ್ನ ಮೆಚ್ಚುಗೆ ಪಡಿಯದೆ, ಉಪಯೋಗಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ನಾವಿಬ್ಬರು ಹಚ್ಚಿಕೊಂಡಿದ್ದೆವು. 
 
                 ಅದೊಂದು "ಕರಾಳ ದಿನ" ಬರದಿದ್ದರೆ,........    ನೆನಸಿಕೊಳ್ಳಲು ಭಯವಾಗತ್ತೆ....
          ಹೌದು ಅದೊಂದು ಭಯಂಕರ ದಿನ ನಮ್ಮೆಲ್ಲರ ಪಾಲಿಗೆ, ನಾನಾಗ 2  sem ಡಿಗ್ರಿಯಲ್ಲಿದ್ದೆ ರಜೆಯ ನಿಮ್ಮಿತ್ತ ಮನೆಗೆ ಬಂದಿದ್ದೆ, ನನ್ನ ಪಿ ಯು ಸಿ ಗೆಳೆತಿಯೊಬ್ಬಳು ತುಂಬಾ ದಿನದಿಂದ ಅವಳ ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದಳು ಸರಿಯೆಂದು ಅವಳ ಮನೆಗೆ ಹೋಗಲು ಸಿದ್ದಳಾಗಿದ್ದೆ. ಹೋಗುವ ಮೊದಲನೇ ದಿನ ಸಾಯಂಕಾಲ ನನ್ನ ಮತ್ತು ನೆತ್ರಕ್ಕನ ಮಾಮೂಲಿ ಜಾಗದಲ್ಲಿ ಬೇಟಿಯಾಗಿ ಗೆಳತಿಯ ಮನೆಗೆ ಹೋಗುವುದಾಗಿ ಹೇಳಿದ್ದೆ. ಹೋಗಿ ಬೇಗ ಹಿಂತಿರುಗಿ ಬಾ ಎಂದಿದ್ದಳು. 
 
                     ನಾನು ನನ್ನ ಗೆಳತಿಯ ಮನೆಗೆ ಹೋಗಿ ಅವಾಗಾಗಲೇ 2  ದಿನವಾಗಿತ್ತು. 3 ನೇ ದಿನ ಪೇಪರ್ ನೋಡಿದಾಗ ಆಘಾತವಾಗಿತ್ತು. ನನ್ನ ಆಪ್ತ ಸ್ನೇಹಿತೆ  ನೆತ್ರಕಳ ದುರ್ಮರಣ ಸುದ್ದಿ ಅವಳ ಫೋಟೋದೊಂದಿಗೆ ಪ್ರಕಟವಾಗಿತ್ತು ನನ್ನ ಗೆಳತಿಯ ಮನೆಯ ಲ್ಯಾಂಡ್ ಲೈನ್ ಫೋನ್ ಹಾಳಗಿತ್ತು ಅದ್ದರಿಂದ ನನಗೆ ವಿಷಯ ತಿಳಿದಿರಲಿಲ್ಲ.ಹೇಗೋ ಆ ಕ್ಷಣ ನಾನು ಮನೆಗೆ ಹೊರಟು ಬಂದೆ ಆದರೆ ಆ ಹೊತ್ತಿಗಾಗಲೇ ಅವಳು ನಮ್ಮನ್ನೆಲ್ಲಾ ಬಿಟ್ಟು ಹೊರಟು ಹೋಗಿದ್ದಳು. 
 
         ಅಣ್ಣನ ಜೊತೆ ಗಣೇಶ ಹಬ್ಬಕ್ಕೆಂದು  ಹೊಸ ಬಟ್ಟೆ ತರಲೆಂದು ಹೋಗಿದ್ದವಳು ತಿರುಗಿ ಬಂದದ್ದು ನಿರ್ಜೀವವಾಗಿ. ದಾರಿಯಲ್ಲಿ ಕಬ್ಬಿಣದ  ಅದಿರು ಸಾಗಿಸುವ ಟ್ರಕ್ ಇವಳಣ್ಣನ ಬೈಕಿಗೆ ಡಿಕ್ಕಿ ಹೊಡೆದಿತ್ತು.  ಆ ರಭಸಕ್ಕೆ ಹಿಂದೆ ಕುಳಿತ ಇವಳು ಹಾರಿ ಬಿದ್ದಾಗ ಇವಳ ಗರ್ಭಕೋಶ ಒಡೆದು ಅತಿ ರಕ್ತ ಸ್ರಾವದಿಂದ ನರಳಿ ಆಸ್ಪತ್ರೆಗೆ ಸಾಗಿಸುವ ಸಾವನ್ನಪ್ಪಿದ್ದಳು. ಇದಾಗಿ ಇಂದಿಗೆ 4 ವರ್ಷಗಳೇ ಕಳೆದವು. ಗಣೇಶ ಹಬ್ಬ ಎಂದ ಕೂಡಲೇ ನಮ್ಮೆಲ್ಲರಿಂದ ದೂರವಾದ ಈ ಸ್ನೇಹಿತೆಯ ನೆನಪು ಹೃದಯ ಹಿಂಡುತ್ತದೆ. ನಿನ್ನ ಸ್ನೇಹಕ್ಕೆ ನಾನು ಚಿರಋಣಿ ಗೆಳತಿ.......